ಕರ್ನಾಟಕ-ಗೋವಾ ಡೈರೆಕ್ಟರೇಟ್ ಆಯೋಜಿಸಿದ ಶಿಬಿರದಲ್ಲಿ ರಕ್ಷಾ ಅಂಚನ್ ಭಾಗಿ


 

ಕರ್ನಾಟಕ ಮತ್ತು ಗೋವಾ ಡೈರೆಕ್ಟರೇಟ್ ಆಯೋಜಿಸುವ `ಇಂಟರ್ ಗ್ರೂಪ್ ತಲ್ ಸೈನಿಕ್’ ಶಿಬಿರವು 4 ಕರ್ನಾಟಕ ಬೆಟಾಲಿಯನ್ ಸಹಯೋಗದೊಂದಿಗೆ ತುಮಕೂರಿನಲ್ಲಿ ಇತ್ತೀಚೆಗೆ ನಡೆಯಿತು.

ಈ ಶಿಬಿರದಲ್ಲಿ ಬೆಂಗಳೂರು ಎ ಮತ್ತು ಬಿ, ಬಳ್ಳಾರಿ, ಮಂಗಳೂರು, ಮೈಸೂರು ಮತ್ತು ಬೆಳಗಾವಿ ತಂಡದ ಕೆಡೆಟ್‍ಗಳ ನಡುವೆ ವಿವಿಧ ಸ್ಪರ್ಧೆ ನಡೆಯಿತು. ಈ ಶಿಬಿರದಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಎನ್‍ಸಿಸಿ ಕೆಡೆಟ್ ಆಗಿರುವ ರಕ್ಷಾ ಅಂಚನ್‍ರವರು ಭಾಗವಹಿಸಿದ್ದಾರೆ. ರಕ್ಷಾರವರು ಮಂಗಳೂರು ತಂಡವನ್ನು ಪ್ರತಿನಿಧಿಸಿದ್ದು, ಇವರು ಬೆಸ್ಟ್ ಕೆಡೆಟ್, ಒಬ್‍ಸ್ಟ್ಯಾಕ್ ಟ್ರೈನಿಂಗ್, ಟೆಸ್ಟ್ ಪಿಚ್ಚಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸಿರುತ್ತಾರೆ. ರಕ್ಷಾ ಅಂಚನ್‍ರವರು ನೆಲ್ಯಾಡಿ ನಿವಾಸಿ ರಮೇಶ್ ಪೂಜಾರಿ, ತಾಯಿ ಉಷಾ ಅಂಚನ್‍ರವರ ಪುತ್ರಿ ಎಂದು ಫಿಲೋಮಿನಾ ಕಾಲೇಜಿನ ಎನ್‍ಸಿಸಿ ಅಧಿಕಾರಿ ಲೆಪ್ಟಿನೆಂಟ್ ಜೋನ್ಸನ್ ಡೇವಿಡ್ ಸಿಕ್ವೇರಾರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.