ಸಾಂಸ್ಕ್ರತಿಕ ಫಿಫೋಫೆಸ್ಟ್ 2018

ಮಂಗಳೂರಿನ ಫಿಶರೀಸ್ ಕಾಲೇಜಿನ ಸ್ವರ್ಣ ಮಹೋತ್ಸವದ ಅಂಗವಾಗಿ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಅಂತರ್ ಕಾಲೇಜು ಸಾಹಿತ್ಯಿಕ ಮತ್ತು ಸಾಂಸ್ಕ್ರತಿಕ ಫಿಫೋಫೆಸ್ಟ್ 2018 ಸ್ಪರ್ಧೆಯಲ್ಲಿ ರಸಪ್ರಶ್ನೆ ವಿಭಾಗದಲ್ಲಿ ಪುತ್ತೂರಿನ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ವಾಣಿಜ್ಯ ವಿಭಾಗದ ಆಕಾಶ್ ಸಿ. ಭಟ್ ಹಾಗೂ ಅಂಜನ್ ಕುಮಾರ್ ಪ್ರಥಮ ಸ್ಥಾನದೊಂದಿಗೆನಗದು, ಟ್ರೋಫಿ ಹಾಗೂ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ.

ಮೂರು ಜಿಲ್ಲೆಗಳ ಪ್ರತಿಷ್ಟಿತ ಪದವಿ ಒಊರ್ವ , ಪದವಿ, ಸ್ನಾತಕೋತ್ತರ ವಹಾಗೂ ವೃತ್ತಿಪರ ಕಾಲೇಜುಗಳು ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ ಪದವಿ ಪೂರ್ವ ವಿದ್ಯಾರ್ಥಿಗಳಾದ ಆಕಾಶ್ ಸಿ. ಭಟ್ ಮತ್ತು ಅಂಜನ್ ಕುಮಾರ್ ಇವರು ಪ್ರಥಮ ಸ್ಥಾನವನ್ನು ಪಡೆಯುವುದರ ಮೂಲಕ ಗಮನಾರ್ಹ ಸಾಧನೆಯನ್ನು ದಾಖಲಿಸಿರುತ್ತಾರೆ.

ತಮ್ಮ ಅಪಾರವಾದ ಜ್ಞಾನದಿಂದ ಎಲ್ಲರ ಪ್ರಶಂಸೆಗೆ ಪಾತ್ರರಾದ ಇವರಲ್ಲಿ ಅಂಜನ್ ಕುಮಾರ್ ‘ಅತ್ಯುತ್ತಮ ರಸಪ್ರಶ್ನಾಪಟು’ ಎನ್ನುವ ವಿಶೇಷ ಬಹುಮಾನವನ್ನು ತಮ್ಮದಾಗಿಸಿಕೊಂಡಿರುವನು.

ಕಾಲೇಜಿನ ಪ್ರಾಂಶುಪಾಲರಾದ ಫಾ| ವಿಜಯ್ ಲೋಬೊ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಪ್ರದರ್ಶನ ಕಲಾ ವಿಭಾಗದ ನಿರ್ದೇಶಕರಾದ ಶ್ರೀಮತಿ ಸುಮನಾ ಪ್ರಶಾಂತ್ ಉಪಸ್ಥಿತರಿದ್ದರು.