ಒಂದು ದಿನದ ಧ್ಯಾನ ಕೂಟ

ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ದಿವ್ಯ ಚೇತನ ಅಸೋಶಿಯೇಶನ್ ವತಿಯಿಂದ ಆ.5 ರಂದು ದಿವ್ಯ ಚೇತನ ಚಾಪಲ್‍ನಲ್ಲಿ ಕಾಲೇಜಿನ ಕ್ರೈಸ್ತ ವಿದ್ಯಾರ್ಥಿಗಳಿಗೆ ಒಂದು ದಿನದ ಧ್ಯಾನ ಕೂಟವನ್ನು ಆಯೋಜಿಸಲಾಗಿತ್ತು.

ಮುಡಿಪು ಚರ್ಚಿನ ಸಹಾಯಕ ಧರ್ಮಗುರು ವಂ|ಶಾನ್ ರೊಡ್ರಿಗಸ್‍ರವರು ಧ್ಯಾನ ಶಿಬಿರವನ್ನು ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಮಂಗಳೂರು ಕಥೋಲಿಕ್ ಧರ್ಮಪ್ರಾಂತ್ಯವು ಪ್ರಸ್ತುತ ವರ್ಷವನ್ನು ಯುವಕರ ವರ್ಷವೆಂದು ಘೋಷಿಸಿದ್ದು `ಪರಿಪೂರ್ಣ ಜೀವನವನ್ನು ಅನುಭವಿಸಿ’ ಎಂಬುದು ಧ್ಯಾನಕೂಟದ ವಿಷಯವಾಗಿತ್ತು. ನಮ್ಮಲ್ಲಿರುವ ಅಶಕ್ತತೆಗಳನ್ನು ಮರೆತು ದೇವರು ನಮಗೆ ಅನುಗ್ರಹಿಸಿದ ಎಲ್ಲಾ ಸಾಮಥ್ರ್ಯಗಳನ್ನು ಗರಿಷ್ಟ ಮಟ್ಟದಲ್ಲಿ ಉಪಯೋಗಿಸುವ ಮೂಲಕ ಜೀವನವನ್ನು ಸಂತೋಷದಿಂದ ಬಾಳಬೇಕು. ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ನಿರ್ಧಾರಗಳನ್ನು ಪರಾಮರ್ಶಿಸಿ, ತೀರ್ಮಾನಿಸಿ ಆಮೇಲೆ ಕಾರ್ಯಶೀಲರಾಗಬೇಕು. ನಂಬಿಕೆ ಮತ್ತು ಕಾರ್ಯಗಳ ಸಮ್ಮಿಲನವಿದ್ದಾಗ ಮಾತ್ರ ನಾವು ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯ. ಜೀವನದಲ್ಲಿ ಯಾವಾಗಲೂ ಭಕ್ತಿ, ನಿರ್ಣಯ ಹಾಗೂ ಶಿಸ್ತನ್ನು ಅಳವಡಿಸಿದಾಗ ಮಾತ್ರ ನಮ್ಮ ಜೀವನವು ಪರಿಪೂರ್ಣವಾಗುವುದು ಎಂದರು.

ಕ್ಯಾಂಪಸ್ ನಿರ್ದೇಶಕರಾದ ವಂ|ಡಾ|ಆ್ಯಂಟನಿ ಪ್ರಕಾಶ್ ಮೊಂತೆರೊರವರು ಉಪಸ್ಥಿತರಿದ್ದು, ಜೀವನದಲ್ಲಿ ಯಾವಾಗಲೂ ಶಿಸ್ತು, ಆಧ್ಯಾತ್ಮಿಕತೆ, ಭಾವನೆಗಳನ್ನು ಹಿಡಿತದಲ್ಲಿರಿಸಿದರೆ ಮಾತ್ರ ನಾವು ಸಮಾಜದಲ್ಲಿ ಉನ್ನತ ಸ್ಥಾನವನ್ನು ಗಳಿಸಿ ಉತ್ತಮ ಪ್ರಜೆಯಾಗಿ ಬಾಳಬಹುದು ಎಂದು ಹೇಳಿದರು.

ಧ್ಯಾಕೂಟದ ಕೊನೆಯಲ್ಲಿ ದಿವ್ಯಬಲಿಪೂಜೆಯನ್ನು ಏರ್ಪಡಿಸಲಾಗಿದ್ದು ವಂ|ಶಾನ್ ರೊಡ್ರಿಗಸರವರು ಪ್ರಧಾನ ಧರ್ಮಗುರುಗಳಾಗಿ, ಪ್ರಾಂಶುಪಾಲರಾದ ವಂ|ವಿಜಯ್ ಲೋಬೊ ಹಾಗೂ ಬನ್ನೂರು ಸಂತ ಅಂತೋನಿ ಚರ್ಚ್‍ನ ಧರ್ಮಗುರು ವಂ|ಪ್ರಶಾಂತ್ ಫೆರ್ನಾಂಡೀಸ್ ಸಹ ಬಲಿಪೂಜೆಯಲ್ಲಿ ಪಾಲ್ಗೊಂಡಿದ್ದರು.

ಬಾಕ್ಸ್

ನಾವೆಲ್ಲರೂ ದೇವರಿಂದ ಹಲವಾರು ವರಗಳನ್ನು ಪಡೆದಿದ್ದು, ಆ ವರಗಳನ್ನು ಉಪಯೋಗಿಸಿ ನಮ್ಮ ಜೀವನವನ್ನು ಅರ್ಥಪೂರ್ಣವಾಗಿ ಜೀವಿಸಿ ಇತರರಿಗೆ ಮಾದರಿಯಾಗಬೇಕು. ದೇವರು ಮತ್ತು ಧರ್ಮದ ಆಚರಣೆಯಲ್ಲಿ ನಂಬಿಕೆಯನ್ನು ಹೊಂದಿದಾಗ ಸಾಧನೆಯ ಶಿಖರವನ್ನೇರಲು ಸಾಧ್ಯವಾಗುತ್ತದೆ. ನಾವು ಯೇಸುವಿನ ಅನುಯಾಯಿಯಾಗಲು ಅವರ ಮೇಲೆ ಅಚಲ ವಿಶ್ವಾಸವನ್ನು ಹೆಚ್ಚಿಸಿಕೊಳ್ಳಬೇಕು,

-ವಂ|ವಿಜಯ್ ಲೋಬೋ, ಪ್ರಾಂಶುಪಾಲರು, ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು