ಧ್ಯಾನ ಶಿಬಿರ

ಸಂತ ಫಿಲೋವಿನಾ ಪದವಿ ಪೂರ್ವ ಕಾಲೇಜ್‍ನ ದಿವ್ಯ ಚೇತನ ಎಸೋಸಿಯೇಶನ್ ವತಿಯಿಂದ ಒಂದು ದಿನದ ಧ್ಯಾನ ಶಿಬಿರವನ್ನು ಪ್ರಥಮ ಹಾಗೂ ದ್ವಿತೀಯ ಪಿಯುಸಿ ಕ್ರೈಸ್ತ ವಿದ್ಯಾರ್ಥಿಗಳಿಗೆ ದಿವ್ಯ ಚೇತನ ಚಾಪೆಲ್‍ನಲ್ಲಿ ಆ.22 ರಂದು ಏರ್ಪಡಿಸಲಾಯಿತು.

ಧ್ಯಾನಕೂಟದ ಬೋಧನೆಯನ್ನು ಮಂಗಳೂರು ಧರ್ಮಪ್ರಾಂತ್ಯದ ‘ಮಂಗಳ ಜ್ಯೋತಿ’ ಇದರ ನಿರ್ದೇಶಕರಾದ ವಂ| ವಿಜಯ್ ಮಚಾದೊರವರು ನೀಡುತ್ತಾ ಮಾತನಾಡಿ, ಆಧುನಿಕ ಯುಗದಲ್ಲಿ ವಿದ್ಯಾರ್ಥಿಗಳು ಅತೀ ಬೇಗನೆ ಸಾಮಾಜಿಕ ಮಾಧ್ಯಮಗಳಿಗೆ ಹಾಗೂ ಇತರ ಅನೇಕ ದುರಾಭ್ಯಾಸಗಳಿಗೆ ಬಲಿಯಾಗುತ್ತಿದ್ದು ಅವರಲ್ಲಿ ಏಕಾಗ್ರತೆ ಮತ್ತುಆತ್ಮವಿಶ್ವಾಸದ ಕೊರತೆಯಿದೆ. ವಿದ್ಯಾರ್ಥಿಗಳು ದೇವರಲ್ಲಿ ನಂಬೆಕೆ, ಪ್ರೀತಿ , ಭಕ್ತಿಯನ್ನು ಇರಿಸಿ ಪ್ರಾರ್ಥಿಸಿದರೆ ಜೀವನದ ಗುರಿಯನ್ನು ಸುಲಭವಾಗಿ ಮುಚ್ಚಲು ಸಾಧ್ಯ ಎಂದು ಹೇಳಿದರು.

ಕಾಲೇಜ್‍ನ ಕ್ಯಾಂಪಸ್ ನಿರ್ದೇಶಕರಾದ ವಂ|ಡಾ| ಆ್ಯಂಟನಿ ಪ್ರಕಾಶ್ ಮೊಂತೆರೊರವರು ಉಪಸ್ಥಿತರಿದ್ದರು. ಕಾಲೇಜು ಪ್ರಾಂಶುಪಾಲರಾದ ವಂ| ವಿಜಯ್ ಲೋಬೊರವರು ಸ್ವಾಗತಿಸಿ, ವಿದ್ಯಾರ್ಥಿಗಳಿಗೆ ಒದಗಿಸಿದ ಅವಕಾಶವನ್ನು ಸದುಪಯೋಗಗೊಳಿಸಬೇಕಾಗಿ ಹೇಳಿದರು. ಬ್ರದರ್ ರೋಬಿನ್ ಸಹಕರಿಸಿದರು.